1792ರ ಮಾರ್ಚ್ 18ರಂದು ಸಹಿ ಮಾಡಲಾದ ಶ್ರೀರಂಗಪಟ್ಟಣ ಒಪ್ಪಂದವು ಮೂರನೇ ಆಂಗ್ಲ-ಮೈಸೂರು ಯುದ್ಧಕ್ಕೆ ಅಂತ್ಯ ತಂದಿತು. ಈ ಒಪ್ಪಂದದ ಮೂಲಕ ಈಸ್ಟ್ ಇಂಡಿಯಾ ಕಂಪನಿಗೆ ತಿರುವಾಂಕೂರು ಸಾಮ್ರಾಜ್ಯ ಮತ್ತು ಕಾಳಿ ನದಿಯ ನಡುವಿನ ಮಲಬಾರ್ ಕರಾವಳಿ ಪ್ರದೇಶದ ದೊಡ್ಡ ಭಾಗ, ಜೊತೆಗೆ ಬಾರಾಮಹಲ್ ಮತ್ತು ದಿಂಡಿಗಲ್ ಜಿಲ್ಲೆಗಳು ದೊರೆಯುವಂತಾಯಿತು. ಪೇಶ್ವೆಗೆ ತುಂಗಭದ್ರಾ ನದಿವರೆಗೆ ಪ್ರದೇಶ ದೊರಕಿತು. ನಿಜಾಮಿಗೆ ಕೃಷ್ಣಾ ನದಿಯಿಂದ ಪೆನ್ನಾರ್ ನದಿವರೆಗೆ ಹಾಗೂ ಪೆನ್ನಾರ್ ನದಿಯ ದಕ್ಷಿಣ ದಂಡೆಯಲ್ಲಿರುವ ಕಡಪ ಮತ್ತು ಗಂಡಿಕೋಟೆ ಕೋಟೆಗಳು ದೊರಕಿದುವು.
This Question is Also Available in:
Englishहिन्दी