ತಂಜಾವೂರು ಸುಮಾರು ಸಾವಿರ ವರ್ಷಗಳ ಹಿಂದೆ ಚೋಳರ ರಾಜಧಾನಿಯಾಗಿತ್ತು. ಈ ಸುಂದರ ಪಟ್ಟಣದ ಸಮೀಪದಲ್ಲಿ ಕಾವೇರಿ ನದಿ ಹರಿಯುತ್ತದೆ. ರಾಜರಾಜ ಚೋಳನು ನಿರ್ಮಿಸಿದ ರಾಜರಾಜೇಶ್ವರ ದೇವಾಲಯವು ಅತ್ಯಂತ ಪ್ರಸಿದ್ಧವಾಗಿದೆ. ಈ ದೇವಾಲಯದ ವಾಸ್ತುಶಿಲ್ಪಿಯಾಗಿದ್ದ ಕುಂಜರಮಲ್ಲನ್ ರಾಜರಾಜ ಪೆರುಂತಚ್ಚನ್ ತಮ್ಮ ಹೆಸರನ್ನು ದೇವಾಲಯದ ಗೋಡೆಯ ಮೇಲೆ ಕೆತ್ತಿಸಿಕೊಂಡಿದ್ದಾರೆ. ದೇವಾಲಯದ ಒಳಗೆ ಮಹತ್ತರವಾದ ಶಿವಲಿಂಗವಿದೆ.
This Question is Also Available in:
Englishहिन्दी