ವೇದೋತ್ತರ ಅವಧಿಯಲ್ಲಿ ವಿಂಧ್ಯ ಪರ್ವತಶ್ರೇಣಿಗಳ ಉತ್ತರ ಭಾಗದಲ್ಲಿರುವ ಮತ್ತು ವಾಯುವ್ಯ ಗಡಿಯಿಂದ ಬಿಹಾರವರೆಗೆ ವಿಸ್ತರಿಸಿದ್ದ ಉತ್ತರ ಭಾರತದ ಪ್ರದೇಶವನ್ನು ಹದಿನಾರು ರಾಜ್ಯಗಳಾಗಿ ವಿಭಜಿಸಲಾಗಿತ್ತು. ಇವುಗಳನ್ನು ಸೋಡಶ ಮಹಾಜನಪದಗಳು ಎಂದು ಕರೆಯಲಾಗುತ್ತಿತ್ತು. ಬೌದ್ಧ ಸಾಹಿತ್ಯದಲ್ಲಿ, ವಿಶೇಷವಾಗಿ ಅಂಗುತ್ತರ ನಿಕಾಯದಲ್ಲಿ ಈ ಹದಿನಾರು ಮಹಾಜನಪದಗಳಾದ ಗಾಂಧಾರ, ಕಾಂಬೋಜ, ಅಸ್ಸಕ, ವತ್ಸ, ಅವಂತಿ, ಶೂರಸೇನ, ಚೇದಿ, ಮಲ್ಲ, ಕುರು, ಪಾಂಚಾಲ, ಮತ್ಸ್ಯ, ವಜ್ಜಿ, ಅಂಗ, ಕೋಸಲ ಮತ್ತು ಮಗಧಗಳನ್ನು ಪಟ್ಟಿ ಮಾಡಲಾಗಿದೆ.
This Question is Also Available in:
Englishहिन्दी