ಉದಯಪುರದ ಸಜ್ಜನಗಢ ಅಭಯಾರಣ್ಯದಲ್ಲಿ ಸುಮಾರು 50 ಹೆಕ್ಟೇರ್ ಪ್ರದೇಶ ಬೆಂಕಿಗೆ ತುತ್ತಾಗಿದೆ. ಇದು ರಾಜಸ್ಥಾನದ ಉದಯಪುರದ ಹೊರವಲಯದಲ್ಲಿ ಅರಾವಳಿ ಪರ್ವತಶ್ರೇಣಿಯಲ್ಲಿದೆ. ಸುಮಾರು 5.19 ಚ.ಕಿ. ವ್ಯಾಪ್ತಿಯ ಈ ಅಭಯಾರಣ್ಯ 1874ರಲ್ಲಿ ಮಹಾರಾಣಾ ಸಜ್ಜನ್ ಸಿಂಗ್ ನಿರ್ಮಿಸಿದ ಸಜ್ಜನಗಢ ಕೋಟೆಯನ್ನು ಸುತ್ತುವರಿದಿದೆ. ಇದರ ಪಶ್ಚಿಮ ಬದಿಯಲ್ಲಿ ಬರಿ ಸರೋವರ, ಅಂದರೆ ಟೈಗರ್ ಲೇಕ್ ಇದೆ. ಇದನ್ನು ಮಹಾರಾಣಾ ರಾಜ್ ಸಿಂಗ್ ನಿರ್ಮಿಸಿದ್ದಾರೆ. ಇಲ್ಲಿ ಸೋಗದ ಮರ, ಮಾವು, ಬೇವು, ಬಾಳೆ ಸೇರಿದಂತೆ ಪತನಶೀಲ ಮತ್ತು ಅರೆ ಸದಾಬಹಾರ ಅರಣ್ಯಗಳಿವೆ. ಚಿರತೆ, ಹಾವು, ಕರಡಿ, ಸಾಂಬಾರ್ ಜಿಂಕೆ ಹಾಗೂ ನಾಲ್ಕು ಕೊಂಬುಗಳ ಹರಣಗಳು ಇಲ್ಲಿ ಕಂಡುಬರುತ್ತವೆ.
This Question is Also Available in:
Englishमराठीहिन्दी